ಅಖಿಲ ಕರ್ನಾಟಕ ಗಾನಯೋಗಿ ಸಂಗೀತ ಪರಿಷತ್ ಕಲಾವಿದರ ಕಲ್ಯಾಣಕ್ಕಾಗಿ ಮತ್ತು ಸಂಗೀತ ಕ್ಷೇತ್ರದ ಸುಧಾರಣೆಗಾಗಿ ಮತ್ತು ಕಲಾವಿದರನ್ನು ಸಂಘತಟಿಸುವದಕ್ಕಾಗಿ ಅಸ್ತಿತ್ವಕ್ಕೆ ತರಲಾಗಿದೆ (ಸ್ಥಾಪನೆ 1996 ನೋಂ,ಸಂ:248 )ನಮ್ಮ ಉದ್ದೇಶ: ಸಂಗೀತ ನೃತ್ಯ ಶಿಕ್ಷಕರ ನೇಮಕಾತಿಯಲ್ಲಿ ಬಿ ಮ್ಯೂಜಿಕ್, ಎಂ ಮ್ಯೂಜಿಕ್ ಪದವಿಧರರಿಗೆ ಮಾತ್ರ ಅವಕಾಶ ನೀಡಬೇಕು,ಕರ್ನಾಟಕ ಸರಕಾರ ನಡೆಸುವ ಪ್ರೌಢ ಶಿಕ್ಷಣ ಮಂಡಳಿಯ ಪರೀಕ್ಷೆಗಳು ರದ್ದು ಮಾಡಬೇಕು, ಸಂಗೀತವೆಂದರೆ ಹಾಡುಗಾರಿಕೆ ಮಾತ್ರವಲ್ಲ ಎಂಬುದು ಸರಕಾರದ ಗಮನಕ್ಕೆ ತಂದು ಸಂಗೀತ ಶಿಕ್ಷಕರ ನೇಮಕಾತಿಯಲ್ಲಿ ಶಾಸ್ತ್ರಿಯ ವಾದ್ಯ ಸಂಗೀತ ಪದವಿಧರರನ್ನು ಸಮಾನವಾಗಿ ತುಂಬಿಕೊಳ್ಳ ಬೇಕು, ಕ್ರೀಡಾ ಪಟುಗಳಿಗೆ ನಿಡುವ ಉದ್ಯೋಗ ಮೀಸಲಾತಿ ಕಲಾವಿದರಿಗೂ ಸಿಗಬೇಕು,ಸಂಸ್ಕೃತ ಮತ್ತು ಉರ್ದು ಶಾಲೆಗಳಿಗೆ ಅನುದಾನ ನೀಡುತ್ತಿರುವಂತೆ ಸಂಗೀತ,ನೃತ್ಯ ಶಾಲೆಗಳಿಗೂ ಅನುದಾನ ನೀಡಬೇಕು, ಕಲಾವಿದರಿಗೆ ಯಸಶ್ವಿನಿ ಯೋಜನೆಯ ವೈದ್ಯಕೀಯ ಲಾಭ ಸಿಗುವಂತಾಗ ಬೇಕು ಇನ್ನು ಹತ್ತು ಹಲವಾರು ಸುಧಾರಣೆಗಳಾಗ ಬೇಕು, ಈಗಾಗಲೇ ಸಂಗೀತ ಶಿಕ್ಷಕರಾಗಿ ಸೇವೆಸಲ್ಲಿಸುತ್ತಿರುವ ಶಿಕ್ಷಕರಿಗೆ ಸಂಗೀತ ನೃತ್ಯ ಪಾಠ ಹೇಳಲು ಮಾತ್ರ ಅವಕಾಶ ನೀಡಬೇಕು, ಇವರಿಗೆ ಬೇರೆ ಕೆಲಸಕ್ಕೆ ಹಚ್ಚಬಾರದು ಎಂಬ ಹಲವಾರು ಬೇಡಿಕೆ ಇಟ್ಟು ಹೋರಾಡಲು ತಯಾರಾಗುತಿದ್ದೇವೆ. ಈ ಕಾರಣಕ್ಕಾಗಿ ನಾವು ಈ ಫೆಸ್ ಬುಕ್ ಆರಂಭಿಸಿದ್ದೇವೆ. ಈ ಜಾಲ ತಾಣದಲ್ಲಿ ನಮ್ಮ ವಿನಂತಿಯನ್ನು ಗಮನಿಸಿ ಸ್ಪಂದಿಸುತ್ತಿರಿಯಂದು ನಂಬಿ ನಿಮ್ಮನ್ನು ಗೆಳೆಯ ಗೆಳೆತಿಯರನ್ನಾಗಿ ಮಾಡಿಕೊಂಡಿದ್ದೇವೆ, ಇಲ್ಲಿ ನೀವು ನಿಮ್ಮ ಅಭಿಪ್ರಾಯ ಹಂಚಿಕೊಳ್ಳುತ್ತಿರಿ ಎಂದು ನಂಬಿದ್ದೇವೆ ಈ ನಮ್ಮ ಹೋರಾಟಕ್ಕೆ ಬೆಂಬಲ ನೀಡಲು ಆಸಕ್ತರಾಗಿದ್ದರೆ ತಮ್ಮ ಪರಿಚಯ ಪತ್ರ ಸಂಪರ್ಕ ವಿಳಾಸ ಮತ್ತು ದೂರವಾಣಿ ಕಳಿಸಿ ಕೊಡಲು ಕೋರುತ್ತೇವೆ
ನಮ್ಮ ವಿಳಾಸ akgspgadag@gmail.com
ಬನ್ನಿ ನಮ್ಮೊಂದಿಗೆ ಕೈಜೋಡಿಸಿ ಸಹಕರಿಸಿ.
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ